tax should Karthik pay to the government
ಕಾರ್ತಿಕ್ ಅವರು ಇತ್ತೀಚೆಗೆ 50 ಲಕ್ಷಗಳ ಗಣನೀಯ ಮೊತ್ತವನ್ನು ಸ್ವೀಕರಿಸಿದರು ಅಂತಹ ಹಣಕಾಸಿನ ಲಾಭಗಳೊಂದಿಗೆ ತೆರಿಗೆ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈ ಬ್ಲಾಗ್ ಪೋಸ್ಟ್ನಲ್ಲಿ, ನಾವು ಭಾರತದಲ್ಲಿ ತೆರಿಗೆಯ ಜಟಿಲತೆಗಳನ್ನು ಪರಿಶೀಲಿಸುತ್ತೇವೆ ಮತ್ತು ಕಾರ್ತಿಕ್ ಸರ್ಕಾರಕ್ಕೆ ಎಷ್ಟು ತೆರಿಗೆಯನ್ನು ನೀಡಬೇಕಾಗಬಹುದು ಎಂಬುದರ ಕುರಿತು ಬೆಳಕು ಚೆಲ್ಲುತ್ತೇವೆ.

ಸದ್ಯ ಅಭುನಿರೀಕ್ಷಿತ BBK10 ರ ಫೈನಲ್ ಮುಗಿದಿದ್ದು, ಜನರ ನೆಚ್ಚಿನ ಕಾರ್ತಿಕ ಮಹೇಶ್ ಬಿಗ್ ಬಾಸ್ ಸೀಸನ್ 10 ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಇನ್ನು 112 ದಿನಗಳು ಬಿಗ್ ಬಾಸ್ ಪ್ರಸಾರಗೊಂಡಿದ್ದು ಪ್ರೇಕ್ಷಕರ ಗಮನ ಸೆಳೆದಿತ್ತು. ಎಲ್ಲೆಡೆ ಬರಿ ಬಿಗ್ ಬಾಸ್ ಸದ್ದು ಕೇಳಿಬರುತ್ತಿತ್ತು.
ಇನ್ನು ಬಿಗ್ ಬಾಸ್ ನ ಕೊನೆಯ ವಾರದಲ್ಲಂತೂ ಬಿಗ್ ಬಾಸ್ ವಿನ್ನರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆ ಶುರುವಾಗಿತ್ತು. ಈ ಬಾರಿ ಸೀಸನ್ 10 ರ ವಿನ್ನರ್ ಯಾರಾಗುತ್ತಾರೆ ಎನ್ನುವುದೇ ಎಲ್ಲರ ಪ್ರಶೆಯಾಗಿತ್ತು. ಸದ್ಯ ಈ ಕುತೂಹಲಕ್ಕೆ ತೆರೆ ಬಿದ್ದು, ಕಿಚ್ಚ ಸುದೀಪ್ ಅವರು ನಿನ್ನೆ ವಿನ್ನರ್ ಯಾರೆಂದು ಘೋಷಿಸಿದ್ದಾರೆ.
ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಎಷ್ಟು ಹಣ ಪಡೆದಿದ್ದಾರೆ..?
BBK10 ರಲ್ಲಿ ಜನರ ನೆಚ್ಚಿನ “ಕಾರ್ತಿಕ್ ಮಹೇಶ್” ಬಿಗ್ ಬಾಸ್ ಟ್ರೋಫಿ ಪಡೆದುಕೊಂಡಿದ್ದಾರೆ. ಅತಿ ಹೆಚ್ಚು ವೋಟ್ ಗಳನ್ನೂ ಪಡೆದುಕೊಂಡು ಕಾರ್ತಿಕ್ ಟಾಪ್ ಒನ್ ಸ್ಥಾನವನ್ನು ಪಡೆದಿದ್ದಾರೆ. ಇನ್ನು ಗ್ ಬಾಸ್ 10 ರ ವಿನ್ನರ್ ಕಾರ್ತಿಕ್ ಗೆ ಬರೋಬ್ಬರಿ 50 ಲಕ್ಷ ನಗದು ಬಹುಮಾನ ಲಭಿಸಿದೆ.
ಇನ್ನು ಓದಿ: HSRP ನಂಬರ್ ಪ್ಲೇಟ್ ಹಾಕಿಸಲು ಇನ್ನು22 ದಿನಗಳು ಬಾಕಿ! ಇಲ್ಲದಿದ್ದಲ್ಲಿ ಕಟ್ಟಬೇಕು ಫೈನ್ ! Book Online
ಇದರ ಜೊತೆಗೆ Maruti Suzuki Brezza Car ಹಾಗೂ Bounce Infinity Electric Scooter ಅನ್ನು ಬಹುಮಾನವಾಗಿ ನೀಡಲಾಗಿದೆ. ವಿನ್ನರ್ ಆದ ಕಾರ್ತಿಕ್ ಬರೋಬರಿ 50 ಲಕ್ಷ ಹಣ ಪಡೆದರು ಕೂಡ ಅಷ್ಟು ಹಣವನ್ನು ಕಾರ್ತಿಕ್ ಮನೆಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಕಾರಣ ನಗದು ಬಹುಮಾದ ಮೊತ್ತಕ್ಕೆ ಟ್ಯಾಕ್ಸ್ ಬೀಳುತ್ತದೆ. ಇದೀಗ ನಾವು ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಗೆ ಸಿಕ್ಕ 50 ಲಕ್ಷ ಹಣದಲ್ಲಿ ಸರ್ಕಾರಕ್ಕೆ ಎಷ್ಟು ತೆರಿಗೆ ಕಟ್ಟಬೇಕು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಗೆ ಸಿಕ್ಕ 50 ಲಕ್ಷ ಹಣದಲ್ಲಿ ಸರ್ಕಾರಕ್ಕೆ ಎಷ್ಟು ತೆರಿಗೆ ಕಟ್ಟಬೇಕು.
ಕರ್ನಾಟಕದಲ್ಲಿ 10 ಸಾವಿರಕ್ಕಿಂತ ಮೇಲಿನ ಮೊತ್ತಕ್ಕೆ ಟ್ಯಾಕ್ಸ್ ಅನ್ವಯವಾಗಲಿದೆ. ಹೀಗಾಗಿ ಕಾರ್ತಿಕ್ ಪಡೆದಿರುವ 50 ಲಕ್ಷಕ್ಕೆ ಹೆಚ್ಚಿನ ಟ್ಯಾಕ್ಸ್ ಬೀಳುವುದಂತೂ ನಿಜ. ಕರ್ನಾಟಕದಲ್ಲಿ ನಗದು ಬಹುಮಾನಕ್ಕೆ ಟ್ಯಾಕ್ಸ್ ಶೇ. 31 .2 ಆಗಿದೆ. ಅಂದರೆ 50 ಲಕ್ಷಕ್ಕೆ 31 .2 % ಟ್ಯಾಕ್ಸ್ ಅನ್ವಯವಾದಾಗ 50 ಲಕ್ಷದಲ್ಲಿ ಕಾರ್ತಿಕ್ ಮಹೇಶ್ ಪಡೆಯುವ ಒಟ್ಟು ಮೊತ್ತ 34 .40 ಲಕ್ಷ ಮಾತ್ರ ಹಣ ಸಿಗಲಿದೆ. ಉಳಿದ 14 .60 ಲಕ್ಷ ಹಣ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ತಲುಪುತ್ತದೆ.
- ವಿರಾಟ್ ಕೊಹ್ಲಿ RCB ಯಲ್ಲಿ ಮತ್ತೆ ನಾಯಕನಾಗಿ ಮರಳಲು ಸಜ್ಜು – IPL 2025 ಗೆ ಮುಹೂರ್ತ - October 30, 2024
- ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ರಾಜ್ಯದಲ್ಲಿ ಮತ್ತೆ ನರ್ಸಿಂಗ್ ಸೀಟುಗಳು ಖಾಲಿ! ಭರ್ತಿಗೆ ಅದೇಶ ನೀಡಿದ ಸರ್ಕಾರ - April 24, 2024
- ಕರ್ನಾಟಕದಲ್ಲಿ 500+ ಅಂಗನವಾಡಿ ಹುದ್ದೆಗಳಿಗೆ ನೇಮಕಾತಿ! ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ. - March 28, 2024