ನಿಮ್ಮ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆಯಬೇಕೆ? ಬೀಜ, ರಸಗೊಬ್ಬರ ಖರೀದಿಗೆ ಹಣದ ಕೊರತೆ ಇದೆಯೆ? ಇನ್ನು ಚಿಂತೆ ಬೇಡ. ರೈತ ಬಾಂಧವರಿಗಾಗಿ ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಯೋಜನೆಯು ನೆರವಿಗೆ ಬಂದಿದೆ. ಈ ಯೋಜನೆಯಡಿ ಯಾವುದೇ ಅಡಮಾನವಿಲ್ಲದೆ ₹1.6 ಲಕ್ಷವರೆಗೆ ಸಾಲ ಸಿಗುತ್ತದೆ. ಬಡ್ಡಿದರವು ಕೇವಲ ಶೇ.4 (ತಿಂಗಳಿಗೆ ಶೇ.0.5) ಮಾತ್ರವಾಗಿದೆ.

📌 ಯೋಜನೆಯ ಮುಖ್ಯ ಲಕ್ಷಣಗಳು:
- ಅಡಮಾನವಿಲ್ಲದೆ ಸಾಲ: ₹1.6 ಲಕ್ಷವರೆಗೆ ಲಭ್ಯ
- ಬಡ್ಡಿದರ: ಶೇ.4 (ಮರುಪಾವತಿ ತಡವಾದರೆ ಶೇ.7)
- ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ KCC ಕಾರ್ಡ್ ಲಭ್ಯ
- ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ತೋಟಗಾರಿಕೆ ಇತ್ಯಾದಿಗೂ ಅನ್ವಯ
- ಅರ್ಜಿ ಸಲ್ಲಿಕೆ – ಆನ್ಲೈನ್ ಹಾಗೂ ಆಫ್ಲೈನ್ ಮೂಲಕ
👨🏻🌾 ಯಾರು ಲಾಭ ಪಡೆಯಬಹುದು?
- ತಮ್ಮ ಹೆಸರಿನಲ್ಲಿ ಜಮೀನಿರುವ ರೈತರು
- ಗುತ್ತಿಗೆ ಪತ್ರದ ಆಧಾರದ ಮೇಲೆ ಕೃಷಿ ಮಾಡುವವರು
- ಹೈನುಗಾರಿಕೆ, ಮೀನುಗಾರಿಕೆ, ತೋಟಗಾರಿಕೆ ಹಾಗೂ ಕೃಷಿ ವ್ಯಾಪಾರದೊಂದಿಗೆ ಸಂಪರ್ಕವಿರುವವರು
- 18 ರಿಂದ 75 ವರ್ಷದೊಳಗಿನವರು
📝 ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- ಜಮೀನಿನ RTC ಪ್ರತಿಯು
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಪಾಸ್ಪೋರ್ಟ್ ಅಳತೆಯ ಫೋಟೋಗಳು
- ಗುತ್ತಿಗೆ ಪತ್ರ (ಅವಶ್ಯಕತೆ ಇರುವವರಿಗೆ)
💼 ಯಾವ ವ್ಯವಹಾರಗಳಿಗೆ ಈ ಸಾಲ ಲಭ್ಯ?
- ಬಿತ್ತನೆ, ರಸಗೊಬ್ಬರ, ಪೆಸ್ಟಿಸೈಡ್ ಖರೀದಿ
- ಕೃಷಿ ಯಂತ್ರೋಪಕರಣ ಖರೀದಿ
- ಹೈನುಗಾರಿಕೆ (ಡೈರಿ ಪ್ಲಸ್)
- ಮೀನುಗಾರಿಕೆ, ತೋಟಗಾರಿಕೆ
- ಬ್ರಾಯ್ಲರ್ ಪ್ಲಸ್ ಯೋಜನೆ
- ಕೃಷಿ ಆಧಾರಿತ ಸಣ್ಣ ವ್ಯಾಪಾರಗಳಿಗೆ ಸಹ ಲಭ್ಯ
ಇನ್ನು ಓದಿ
ಇನ್ಮುಂದೆ ಅಡ್ಡ ಬಂದು ವಾಹನ ತಪಾಸಣೆ ಬ್ರೇಕ್! DGP ಖಡಕ್ ಆದೇಶ – ಪೊಲೀಸ್ ಠಾಣೆಗಳಿಗೆ 10 ಕಟ್ಟುನಿಟ್ಟಾದ ಸೂಚನೆಗಳು
🌐 ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- PM-Kisan ವೆಬ್ಸೈಟ್ ಗೆ ಹೋಗಿ
- “KCC Form Download” ಲಿಂಕ್ ಕ್ಲಿಕ್ ಮಾಡಿ
- ಫಾರ್ಮ್ ಡೌನ್ಲೋಡ್ ಮಾಡಿ, ಭರ್ತಿ ಮಾಡಿ
- ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಬ್ಯಾಂಕ್ಗೆ ಸಲ್ಲಿಸಿ
- ಪರಿಶೀಲನೆಯ ನಂತರ 15 ದಿನಗಳಲ್ಲಿ ಕಾರ್ಡ್ ಸಿಗುತ್ತದೆ
🏦 ಭಾಗವಹಿಸುತ್ತಿರುವ ಪ್ರಮುಖ ಬ್ಯಾಂಕುಗಳು:
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
- HDFC ಬ್ಯಾಂಕ್
- ICICI ಬ್ಯಾಂಕ್
- PNB
- Axis ಬ್ಯಾಂಕ್
📌 ವಿಶೇಷ ಟಿಪ್ಪಣಿ:
- ಈ ಯೋಜನೆಯು 5 ವರ್ಷಗಳವರೆಗೆ ಮಾನ್ಯತೆ ಹೊಂದಿದ್ದು, ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ ಹೆಚ್ಚು ಬಡ್ಡಿ ಬಾಧ್ಯತೆ ಇಲ್ಲ.
- ಕಾರ್ಡ್ ಯಾವುದೇ ಕಾರಣದಿಂದ ಬಂದ್ ಆದರೂ, ಅದನ್ನು ಪುನಃ ಸಕ್ರಿಯಗೊಳಿಸಲು ಪ್ರಕ್ರಿಯೆ ಸುಲಭವಾಗಿದೆ.
🎯 ಯಾಕೆ ಈ ಯೋಜನೆ ಇಷ್ಟು ಮಹತ್ವದದು?
ಭಾರತದ ಸುಮಾರು 3 ಕೋಟಿ ರೈತ ಕುಟುಂಬಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದು, ಇದು ಆರ್ಥಿಕ ಬಲ ನೀಡುವತ್ತ ಒಂದು ಭರವಸೆಯ ಹೆಜ್ಜೆ. ಸಾಲದ ಅಡಮಾನದ ಚಿಂತೆ ಇಲ್ಲದೆ ಬೆಳೆಗಾರರು ಉತ್ಸಾಹದಿಂದ ಬೆಳೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಹುದು.
- ಯಾವುದೇ ಬ್ಯಾಂಕಿನಲ್ಲಿ ಮನೆ, ಕಾರು, ಪರ್ಸನಲ್ ಲೋನ್ ಇದ್ದೋರಿಗೆ ಭರ್ಜರಿ ಸುದ್ದಿ.! ರೆಪೋ ದರ ಮತ್ತೆ ಕಡಿತ. - June 5, 2025
- ಮುಂಗಾರು ಶುರು ಆಗ್ತಿದ್ದಂತೆ ಕೃಷಿ ಇಲಾಖೆಯಿಂದ ಕರ್ನಾಟಕ ರೈತರಿಗೆ ಭರ್ಜರಿ ಸಬ್ಸಿಡಿ ಯೋಜನೆಗಳು! ಸಂಪೂರ್ಣ ಮಾಹಿತಿ - June 5, 2025
- ರೈತರಿಗೆ ಯಾವುದೇ ಅಡಮಾನ ಇಲ್ಲದೆ 50 ಪೈಸೆ ಬಡ್ಡಿಗೆ ₹1.6 ಲಕ್ಷದವರೆಗೆ ಸಾಲ.!!! 3 ಕೋಟಿ ರೈತ ಕುಟುಂಬಗಳು ಲಾಭ.. - June 4, 2025