ಸ್ನೇಹಿತರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಪ್ರಯಾಣಿಸುವ ದರ ಕೂಡ ಹೆಚ್ಚಾಗುತ್ತದೆ ಅದರಲ್ಲೂ ಹಬ್ಬ ಹರಿದಿನಗಳಲ್ಲಿ ಪ್ರಯಾಣದರವು ಗಗನ ಇರುತ್ತದೆ ಇದರಿಂದ ನಮ್ಮ ಕರ್ನಾಟಕ ಸರ್ಕಾರವು ಕೆಲವೊಂದು ಯೋಜನೆಗಳನ್ನು ಹೊರಹಾಕಿದೆ. ಕರ್ನಾಟಕದಲ್ಲಿ ಕೆಲವೊಂದು ಜಿಲ್ಲೆಗಳಲ್ಲಿ ಅಧಿಕ ಬಸ್ ಗಳನ್ನು ಬಿಡಲಾಗಿದೆ ಬನ್ನಿ ಈ ಲೇಖನದಲ್ಲಿ ನಾವು ಯಾವ ಯಾವ ಜಿಲ್ಲೆಗಳಲ್ಲಿ ಅಧಿಕ ಬುಸು ಗಳನ್ನು ನೀಡಲಾಗಿದೆ ಎಂದು ಕೆಳಗಡೆ ನೀಡಿದ್ದೇವೆ.

ಪ್ರಯಾಣ ಮಾಡುವ ಜನರಿಗೆ ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ಹೊಸ ವಿಚಾರ ಒಂದನ್ನು ಯುಗಾದಿ ಹಬ್ಬದ ಪ್ರಯುಕ್ತ ಹೊಸ ವಿಚಾರವುದೆಂದು ಪ್ರಸ್ತಾಪ ಮಾಡಿದೆ. ಹಾಗಾಗಿ ರಾಜ್ಯದ ಜನತೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ನೀಡಲಾಗಿರುವ ಈ ಒಂದು ವಿಚಾರ ದೊಡ್ಡ ಖುಷಿ ನೀಡುತ್ತಿದೆ ಎಂದು ಹೇಳಬಹುದು.
ಹೆಚ್ಚುವರಿ ಸರ್ಕಾರಿ ಬಸ್ ಗಳು :
ಪ್ರಯಾಣ ಮಾಡುವವರ ಪ್ರಯಾಣಿಕರ ಸಂಖ್ಯೆ ಯುಗಾದಿ ಹಬ್ಬದ ಪ್ರಯುಕ್ತವಾಗಿ ಹೆಚ್ಚಾಗಲಿದೆ ಎಂದು ಗಮನಿಸಿದ ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಯು ಹೆಚ್ಚುವರಿ ಎರಡು ಸಾವಿರಕ್ಕೂ ಹೆಚ್ಚು ಬಸ್ಸು ವ್ಯವಸ್ಥೆಯನ್ನು ಮಾಡಲು ಪ್ರಯಾಣಿಕರ ಅನುಕೂಲಕ್ಕಾಗಿ ಮುಂದಾಗಿದೆ.
ಕೇವಲ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಅನೇಕ ಭಾಗದಲ್ಲಿಯೂ ಕೂಡ ಈ ಬಸ್ ಗಳು ಇರಲಿವೆ. ಹಾಗಾಗಿ ಸರ್ಕಾರಿ ಬಸ್ ಪ್ರಯಾಣವನ್ನು ನೀವೇನಾದರೂ ಮಾಡುವವರಾಗಿದ್ದರೆ ರಾಜ್ಯ ಸರ್ಕಾರ ನೀಡಿರುವ ಈ ಒಂದು ಸುದ್ದಿ ಹೆಚ್ಚಿನ ಅನುಕೂಲ ಮಾಡಲಿದೆ ಎಂದು ಹೇಳಬಹುದು.
ಸಾಲು ಸಾಲು ರಜೆ ಸಿಗಲಿದೆ :
ಕೆಲಸ ಮಾಡುವ ವರ್ಗಕ್ಕೆ ಏಪ್ರಿಲ್ ತಿಂಗಳಿನದ್ದು ಸಾಲು ಸಾಲು ರಜೆಗಳು ಒಟ್ಟಿಗೆ ಸಿಗಲಿದೆ ಆರು ಮತ್ತು ಏಳನೇ ತಾರೀಕಿನಂದು ಬಹುತೇಕ ಕಂಪನಿಗಳಲ್ಲಿ ಶನಿವಾರ ಭಾನುವಾರ ಆದ ಕಾರಣದಿಂದ ರಜೆ ಇರಲಿದೆ ಅದೇ ರೀತಿ ಯುಗಾದಿ ಹಬ್ಬ ಏಪ್ರಿಲ್ ಒಂಬತ್ತರಂದು ಇರುವ ಕಾರಣದಿಂದಾಗಿ ಸೋಮವಾರ ಮಾತ್ರ ಆಫೀಸಿರುವ ಕಾರಣ ಸಾಕಷ್ಟು ಜನರು ಅದೊಂದು ದಿನ ರಜೆ ಮಾಡಿದರೆ ಒಟ್ಟು ನಾಲ್ಕು ದಿನ ಕೆಲಸ ಮಾಡುವಂತಹ ವರ್ಗಕ್ಕೆ ರಜೆ ಸಿಕ್ಕಂತಾಗುತ್ತದೆ.
ಗುರುವಾರ ಅಂದರೆ ಏಪ್ರಿಲ್ ೧೧ ರಂದು ಮತ್ತೆ ಹಬ್ಬ ಇರುವುದರಿಂದ ಅದಾದ ನಂತರ ಮತ್ತೆ ಪುನಃ 13 ಮತ್ತು 14 ರಂದು ಶನಿವಾರ ಮತ್ತು ಭಾನುವಾರ ಕೂಡ ರಜೆ ಇರಲಿದೆ ಹಾಗಾಗಿ ಸಾಲು ಸಾಲು ರಜೆ ಇರುವ ಕಾರಣದಿಂದ ಪ್ರಯಾಣ ಮಾಡುವವರ ಸಂಖ್ಯೆ ಸರ್ಕಾರಿ ಬಸ್ ನಲ್ಲಿ ಹೆಚ್ಚಳವಾಗಲಿದೆ. ಹಾಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಹೆಚ್ಚುವರಿ ಬಸ್ ಬಿಡುಗಡೆ ಮಾಡಲು ತಿಳಿಸಿದೆ ಹಾಗೂ 200 ಬಸ್ ಗಳನ್ನು ಹೆಚ್ಚುವರಿ ಆಗಿ ಕೆಎಸ್ಆರ್ಟಿಸಿ ಬಸ್ ಬಿಡುಗಡೆ ಮಾಡಲಿದೆ.
ಒಟ್ಟು ಎಷ್ಟು ಬಸ್ಗಳು ಇರಲಿವೆ ?
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿವಿಧ ಸ್ಥಳಗಳಿಗೆ ಅನುಗುಣವಾಗಿ ಸರ್ಕಾರಿ ಬಸ್ಗಳದು ಬಿಡುಗಡೆ ಮಾಡಿದ್ದು ಒಟ್ಟು ಎಷ್ಟು ಬಸ್ ಗಳಿವೆ ಎಂದು ನೋಡುವುದಾದರೆ,
- ವಾಯುವ್ಯ ಸಾರಿಗೆ ರಸ್ತೆ .ಸಾರಿಗೆ ಸಂಸ್ಥೆ 145 ಬಸ್.
- ಕೆಕೆಆರ್ಟಿಸಿ 200 ಬಸ್
- ಕೆಎಸ್ಆರ್ಟಿಸಿ 1750 ಬಸ್.
- ಬಿಎಂಟಿಸಿ 200 ಬಸ್.
ಹೀಗೆ ಒಟ್ಟು ನಾಲ್ಕು ನಿಗಮಗಳಿಂದ ರಾಜ್ಯದಲ್ಲಿ 2275 ಬಸ್ ಗಳು ಬಿಡುಗಡೆಯಾಗಲಿದೆ. ಹಾಗಾಗಿ ಪ್ರಯಾಣಿಕರು ಬಸ್ ರಶ್ ಇರುವಂತಹ ಚಿಂತೆಯನ್ನು ಬಿಟ್ಟು ಹಬ್ಬದ ಸಂದರ್ಭದಲ್ಲಿಯೂ ಕೂಡ ಪ್ರಯಾಣ ಮಾಡಲು ಸರ್ಕಾರಿ ಬಸ್ಗಳನ್ನು ಬಳಸಬಹುದಾಗಿದೆ.
ಹೀಗೆ ಸಾರಿಗೆ ಇಲಾಖೆಯು ಹಬ್ಬದ ಪ್ರಯುಕ್ತ ಸಾಲು ಸಾಲು ರಜೆ ಇರುವ ಕಾರಣದಿಂದಾಗಿ ಪ್ರಯಾಣಿಕರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಹೆಚ್ಚುವರಿ ಬಸ್ಗಳನ್ನು ಬಿಡಲು ಮುದ್ದಾಗಿದೆ .
ಏನೇ ಇರಲಿ ಸ್ನೇಹಿತರೆ ರಾಜ ಸರ್ಕಾರವು ಈ ಒಂದು ಯೋಜನೆಗಳಿಂದ ರಾಜ್ಯದ ಪ್ರಜೆಗಳಿಗೆ ತುಂಬಾ ಅನುಕೂಲವಾಗಿದೆ ಮತ್ತು ಮಹಿಳೆಯರಿಗೆ ಉಚಿತ ಪ್ರಯಾಣವು ಕೂಡ ಸಹಕಾರಿಯಾಗಿದೆ ಇಂತಹ ಒಂದು ಯೋಜನೆಗಳು ನಮ್ಮ ರಾಜ್ಯದಲ್ಲಿ ಬರಬೇಕೆಂದು ನಾವು ಆಶಿಸೋಣ.
- ರೈತರಿಗೆ ಯಾವುದೇ ಅಡಮಾನ ಇಲ್ಲದೆ 50 ಪೈಸೆ ಬಡ್ಡಿಗೆ ₹1.6 ಲಕ್ಷದವರೆಗೆ ಸಾಲ.!!! 3 ಕೋಟಿ ರೈತ ಕುಟುಂಬಗಳು ಲಾಭ.. - June 4, 2025
- ಮುಂಗಾರು ಶುರು ಆಗ್ತಿದ್ದಂತೆ ಕೃಷಿ ಇಲಾಖೆಯಿಂದ ಕರ್ನಾಟಕ ರೈತರಿಗೆ ಭರ್ಜರಿ ಸಬ್ಸಿಡಿ ಯೋಜನೆಗಳು! ಸಂಪೂರ್ಣ ಮಾಹಿತಿ - June 4, 2025
- RCB ಅಭಿಮಾನಿಗಳ ಗೆಲುವಿಗೆ ಸಂಭ್ರಮದ ಸಂಭ್ರಮ: ಬೆಂಗಳೂರಿನಲ್ಲಿ ಇಂದು ಐತಿಹಾಸಿಕ ವಿಜಯೋತ್ಸವ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್. - June 4, 2025