rtgh

Mayank Agarwal: ಆಸಿಡ್ ಕುಡಿದ ಭಾರತದ ಸ್ಟಾರ್ ಕ್ರಿಕೆಟ್ ಆಟಗಾರ! ಆಸ್ಪತ್ರೆಗೆ ದಾಖಲಾದ ಕರ್ನಾಟಕ ತಂಡದ ನಾಯಕ.


Cricketer Mayank Agarwal hospitalized

Mayank Agarwal: ಆಘಾತಕಾರಿ ಘಟನೆಯೊಂದರಲ್ಲಿ, ಭಾರತದ ಪ್ರೀತಿಯ ಕ್ರಿಕೆಟ್ ತಾರೆಗಳಲ್ಲಿ ಒಬ್ಬರಾದ ಅವರು ಆಸಿಡ್ ಸೇವಿಸಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಯು ಕ್ರಿಕೆಟ್ ಸಮುದಾಯ ಮತ್ತು ಅಭಿಮಾನಿಗಳಲ್ಲಿ ಆಘಾತ ತರಂಗಗಳನ್ನು ಕಳುಹಿಸಿದೆ, ಅನೇಕರು ಅಪನಂಬಿಕೆಗೆ ಒಳಗಾಗಿದ್ದಾರೆ ಮತ್ತು ಉತ್ತರಗಳನ್ನು ಹುಡುಕುತ್ತಿದ್ದಾರೆ.

Cricketer Mayank Agarwal hospitalized after drinking acid in flight
Cricketer Mayank Agarwal hospitalized after drinking acid in flight

ಭಾರತೀಯ ತಂಡದ ಖ್ಯಾತ ಕ್ರಿಕೆಟ್ ಆಟಗಾರ Mayank Agarwal ಅವರ ಆರೋಗ್ಯ ಸ್ಥಿತಿ ಹದೆಗೆಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.ಅನಾರೋಗ್ಯದ ಕಾರಣ Mayank Agarwal ಆಸ್ಪತ್ರೆ ದಾಖಲಾಗಿದ್ದಾರೆ. ಕರ್ನಾಟಕ ತಂಡದ ನಾಯಕ Mayank Agarwal ಅವರ ದಿಢೀರ್ ಅನಾರೋಗ್ಯಕ್ಕೆ ಕಾರಣವೇನು..? ಎನ್ನುವ ಬಗ್ಗೆ ಎಲ್ಲರು ಯೋಚಿಸುತ್ತಿದ್ದಾರೆ.

ಆಸಿಡ್ ಕುಡಿದ ಭಾರತದ ಸ್ಟಾರ್ ಕ್ರಿಕೆಟ್ ಆಟಗಾರ!

ಇನ್ನು ತ್ರಿಪುರ ವಿರುದ್ದ ಅಗರ್ತಲದಲ್ಲಿ ಜನವರಿ 26 ರಿಂದ Mayank Agarwal ಪಂದ್ಯವನ್ನು ಆಡಿದ್ದರು. ಈ ಪಂದ್ಯದಲ್ಲಿ ಮಯಾಂಕ್ 51 ಮತ್ತು 17 ರನ್‌ ಗಳ ಇನ್ನಿಂಗ್ಸ್‌ ಗಳನ್ನು ಆಡಿದ್ದು ಅವರ ತಂಡ ಕರ್ನಾಟಕ 29 ರನ್‌ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಇದೀಗ ನಾವು ಈ ಲೇಖನದಲ್ಲಿ ಮಯಾಂಕ್ ಅವರ ದಿಢೀರ್ ಅನಾರೋಗ್ಯಕ್ಕೆ ಕಾರಣ ಏನಿರಬಹದು ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Cricketer Mayank Agarwal hospitalized after drinking acid in flight

ಆಸ್ಪತ್ರೆಗೆ ದಾಖಲಾದ ಕರ್ನಾಟಕ ತಂಡದ ನಾಯಕ

ನೀರು ಎಂದು ತಪ್ಪಾಗಿ ಬಾಟಲಿಯಲ್ಲಿದ್ದ ಆಸಿಡ್ ತರಹದ ವಸ್ತುವನ್ನು ಮಯಾಂಕ್ ಕುಡಿದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ತ್ರಿಪುರಾ ಕ್ರಿಕೆಟ್ ಸಂಸ್ಥೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ವಾಸುದೇವ್ ಚಕ್ರವರ್ತಿ ಮಯಾಂಕ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಇನ್ನು ಓದಿ: ಪ್ರಜೆಗಳಿಗೆ ಬಿಗ್ ಶಾಕ್! ಫೆಬ್ರವರಿ 01 ರಿಂದ LPG ಸಿಲಿಂಡರ್ ಬೆಲೆ ಏರಿಕೆ.

ಸೋಮವಾರ ರಣಜಿ ಟ್ರೋಫಿ ಪಂದ್ಯಕ್ಕಾಗಿ ಅಗರ್ತಲಾದಿಂದ ಹಿಂದಿರುಗುತ್ತಿದ್ದ ಅಗರ್ವಾಲ್ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಿದ ತಕ್ಷಣ ಅವರ ಆರೋಗ್ಯ ಹದಗೆಟ್ಟಿತು. ಅವರ ಬಾಯಿ ಮತ್ತು ಗಂಟಲಿನಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿತು ಮತ್ತು ತಕ್ಷಣವೇ ಅವರನ್ನು ಅಗರ್ತಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಮಯಾಂಕ್ ಅಪಾಯದಿಂದ ಪಾರಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

ಮಯಾಂಕ್ ಅಗರ್ವಾಲ್ ಅವರನ್ನು ತುರ್ತು ಪರಿಸ್ಥಿತಿಯಲ್ಲಿ ದಾಖಲಿಸಲಾಗಿದೆ ಎಂದು ನನಗೆ ಕರೆ ಬಂದಿತು. ಬಾಟಲಿಯಲ್ಲಿದ್ದ ಆಸಿಡ್ ತರಹದ ವಸ್ತುವನ್ನು ನೀರು ಎಂದು ತಪ್ಪಾಗಿ ಕುಡಿದರು. ಇದಾದ ನಂತರ ಬಾಯಿ ಮತ್ತು ಗಂಟಲು ಊದಿಕೊಂಡಿತು. ಆಸ್ಪತ್ರೆ ತಲುಪಿದಾಗ ಮುಖ ಊದಿಕೊಂಡು ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಪುರಾ ಕ್ರಿಕೆಟ್ ಸಂಸ್ಥೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ವಾಸುದೇವ್ ಚಕ್ರವರ್ತಿ ಹೇಳಿಕೆ ನೀಡಿದ್ದಾರೆ.


Leave a Reply

Your email address will not be published. Required fields are marked *