rtgh

ರಕ್ಷಾ ಬಂಧನದ ಇತಿಹಾಸ ಏನು ಗೊತ್ತಾ? ರಕ್ಷಾ ಬಂಧನದ ದಿನಾಂಕ, ಶುಭ ಮೂಹೂರ್ತ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ


ಶ್ರಾವಣ ಮಾಸದ ಹುಣ್ಣೆಮೆಯ ದಿನ ಅಂದರೆ ನೂಲು ಹುಣ್ಣಿಮೆಯ ದಿನ ರಕ್ಷಾ ಬಂಧನ ಆಚರಿಸಲಾಗುತ್ತದೆ. ಆದರೆ ಈ ವರ್ಷ ಭದ್ರ ಕಾಲ ಬಂದಿರುವುದರಿಂದ ರಕ್ಷಾ ಬಂಧನದ ದಿನಾಂಕದಲ್ಲಿ ಅನೇಕರಿಗೆ ಗೊಂದಲವಿದೆ. ಆಗಸ್ಟ್ 30 ರಂದು ರಕ್ಷಾ ಬಂಧನ ಆಚರಿಸಬೇಕಾ ಅಥವಾ ಆಗಸ್ಟ್ 31 ರಂದು ರಾಖಿ ಕಟ್ಟಬೇಕೋ ಎಂದು ಕಂಫ್ಯೂಸ್​ ಆಗಬೇಡಿ.
raksha bandhan in kannada
raksha bandhan in kannada

raksha bandhan essay in kannada

ಒಡಹುಟ್ಟಿದವರೊಂದಿಗಿನ ಅರ್ಥಪೂರ್ಣ ಬಂಧವನ್ನು ವಾರ್ಷಿಕವಾಗಿ ಆಚರಿಸಲು ಇರುವ ಹಬ್ಬವೇ ರಕ್ಷಾ ಬಂಧನ ಅಥವಾ ರಾಖಿ ಹಬ್ಬ. ಸಾಂಪ್ರದಾಯಿಕವಾಗಿ, ಸಹೋದರಿಯರು ತಮ್ಮ ಸಹೋದರರ ಕೈಗೆ ರಕ್ಷಾ ಬಂಧನ ದಿನದಂದು ರಾಖಿ ಕಟ್ಟುತ್ತಾರೆ. ಸಹೋದರನ ಸಂತೋಷ, ಆರೋಗ್ಯ, ಆಯಸ್ಸಿಗಾಗಿ ಸಹೋದರಿ ಬಯಸಿದರೆ, ತಮ್ಮ ಸಹೋದರಿಯರನ್ನು ಸದಾ ಕಾಲ ರಕ್ಷಿಸಲು ಮತ್ತು ಪ್ರೀತಿಸಲು ಸಹೋದರ ಭರವಸೆ ನೀಡುತ್ತಾನೆ. ಸಹೋದರಿಯ ಶ್ರೀರಕ್ಷೆ ಸಹೋದರನ ಕರ್ತವ್ಯವಾಗಿದೆ. ಇದೇ ರಕ್ಷಾ ಬಂಧನದ ಮಹತ್ವವಾಗಿದೆ. ಹಾಗೆಯೇ ಸಹೋದರಿಗೆ ಸಹೋದರ ಉಡುಗೊರೆಯನ್ನು ನೀಡುತ್ತಾನೆ.

ರಕ್ಷಾ ಬಂಧನದ ದಿನಾಂಕ ಮತ್ತು ಶುಭ ಮುಹೂರ್ತ

ಶ್ರಾವಣ ಮಾಸದ ಹುಣ್ಣೆಮೆಯ ದಿನ ಅಂದರೆ ನೂಲು ಹುಣ್ಣಿಮೆಯ ದಿನ ರಕ್ಷಾ ಬಂಧನ ಆಚರಿಸಲಾಗುತ್ತದೆ. ಆದರೆ ಈ ವರ್ಷ ಭದ್ರ ಕಾಲ ಬಂದಿರುವುದರಿಂದ ರಕ್ಷಾ ಬಂಧನದ ದಿನಾಂಕದಲ್ಲಿ ಅನೇಕರಿಗೆ ಗೊಂದಲವಿದೆ. ಆಗಸ್ಟ್ 30 ರಂದು ರಕ್ಷಾ ಬಂಧನ ಆಚರಿಸಬೇಕಾ ಅಥವಾ ಆಗಸ್ಟ್ 31 ರಂದು ರಾಖಿ ಕಟ್ಟಬೇಕೋ ಎಂದು ಕಂಫ್ಯೂಸ್​ ಆಗಬೇಡಿ. ಈ ವರ್ಷ ಆಗಸ್ಟ್ 30 ರಂದು (ಬುಧವಾರ) ರಕ್ಷಾ ಬಂಧನ ಬಂದಿದೆ. ಭದ್ರ ಕಾಲ ಇರುವ ಕಾರಣ ಆಗಸ್ಟ್​ 30ರ ಮುಂಜಾನೆ 5.50 ರಿಂದ ಸಂಜೆ 6:03ರ ನಡುವೆ ರಾಖಿ ಕಟ್ಟಲು ಶುಭ ಮುಹೂರ್ತವಿದೆ. ಹಿಂದೂ ಧರ್ಮದಲ್ಲಿ ಭದ್ರ ಕಾಲದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡುವುದಿಲ್ಲ. ಇದನ್ನು ಅಶುಭವೆಂದು ಪರಿಗಣಿಸಲಾಗಿದೆ.

ರಕ್ಷಾ ಬಂಧನದ ಇತಿಹಾಸ

ಹಿಂದೂ ಪುರಾಣದ ಪ್ರಕಾರ, ಮಹಾಭಾರತದ ಅವಧಿಯಿಂದಲೇ ರಕ್ಷಾ ಬಂಧನದ ಇತಿಹಾಸ ಆರಂಭವಾಗುತ್ತದೆ. ಆ ಸಮಯದಲ್ಲಿ ಸುದರ್ಶನ ಚಕ್ರ ತಾಗಿ ಕೃಷ್ಣನ ಕಿರುಬೆರಳಿಗೆ ಗಾಯವಾಗುತ್ತದೆ. ಆಕಸ್ಮಿಕವಾಗಿ ಆದ ಈ ಗಾಯವನ್ನು ತಪ್ಪಿಸಲು ದ್ರೌಪದಿಯು ಪ್ರಯತ್ನಿಸುತ್ತಾಳೆ. ಅದಕ್ಕಾಗಿ ಕೃಷ್ಣನ ಮಣಿಕಟ್ಟಿನ ಮೇಲೆ ಬಟ್ಟೆಯನ್ನು ಕಟ್ಟುತ್ತಾಳೆ. ಈ ಮೂಲಕ ಹೆಚ್ಚಿನ ರಕ್ತ ಹೊರಕ್ಕೆ ಹೋಗದಂತೆ ತಡೆಯುತ್ತಾಳೆ. ದ್ರೌಪದಿಯ ಈ ಕ್ರಮದಿಂದ ಕೃಷ್ಣ ತೃಪ್ತನಾಗುತ್ತಾನೆ. ದ್ರೌಪದಿಯ ಈ ಕಾಳಜಿಯನ್ನು ಜಗತ್ತು ನೆನಪಿನಲ್ಲಿಟ್ಟುಕೊಳ್ಳಬೇಕು ಎನ್ನುತ್ತಾನೆ. ಇದನ್ನು ಶ್ರೀಕೃಷ್ಣನು ರಕ್ಷಾ ಸೂತ್ರ ಎಂದು ಕರೆಯುತ್ತಾನೆ. ಮಹಾಭಾರತದಲ್ಲಿ ದುಷ್ಯಾಸನ ದ್ರೌಪದಿಯ ಸೀರೆ ಎಳೆಯುವ ಸಂದರ್ಭದಲ್ಲಿ ಶ್ರೀಕೃಷ್ಣನು ದ್ರೌಪದಿಯ ಮಾನ ಕಾಪಾಡುತ್ತಾನೆ. ಈ ಮೂಲಕ ತನಗೆ ರಕ್ಷಾ ಸೂತ್ರ ಕಟ್ಟಿದ ಸಹೋದರಿಯ ರಕ್ಷಣೆ ಮಾಡುತ್ತಾನೆ.

ರಕ್ಷಾ ಬಂಧನದ ಕುರಿತು ಸಾಕಷ್ಟು ದಂತಕತೆಗಳೂ ಇವೆ ಅಲೆಕ್ಸಾಂಡರನು ಭಾರತದ ಮೇಲೆ ದಂಡೆತ್ತಿ ಬಂದಾಗ ಅವನನ್ನು ಧೈರ್ಯದಿಂದ ಎದುರಿಸಿದವನು ಪೋರಸ್. ಆಗ ಅವರಿಬ್ಬರ ನಡುವೆ ಯುದ್ಧ ಆರಂಭಗೊಂಡಿತು. ಇದೇ ಸಮಯದಲ್ಲಿ ಅಲೆಕ್ಸಾಂಡರನ ಪತ್ನಿ ರೊಕ್ಸಾನಳು ಪೋರಸ್‌ಗೆ ಒಂದು ಪವಿತ್ರ ದಾರವನ್ನು (ರಾಖಿ) ಕಳುಹಿಸಿದಳು. ಅದರ ಜೊತೆಗೆ ಒಂದು ಮನವಿ ಸಹ ಇತ್ತು. ತನ್ನ ಪತಿಯನ್ನು ಕೊಲ್ಲದಿರುವಂತೆ ಆಕೆ ಮನವಿ ಮಾಡಿದ್ದಳು. ಯುದ್ಧದಲ್ಲಿ ಪೋರಸ್‌ ಅಲೆಕ್ಸಾಂಡರನ್ನು ಕೊಲ್ಲಲಿಲ್ಲವಂತೆ. ಆತನ ಕೈಯಲ್ಲಿದ್ದ ರಾಖಿಯನ್ನು ನೋಡಿ ಆತ ಕೊಲ್ಲಲಿಲ್ಲವಂತೆ.

ರಾಖಿ ಕಟ್ಟುವಾಗ ಪೂಜಾ ತಟ್ಟೆಯಲ್ಲಿ ಯಾವ್ಯಾವ ವಸ್ತುಗಳಿರಬೇಕು?

ರಕ್ಷಾ ಬಂಧನದಂದು ಸಹೋದರಿ ಸಹೋದರನಿಗೆ ಆರತಿ ಮಾಡಿ ರಾಖಿ ಕಟ್ಟುತ್ತಾಳೆ. ರಾಖಿ ಕಟ್ಟುವಾಗ ಪೂಜಾ ತಟ್ಟೆಯಲ್ಲಿ ಅಕ್ಷತೆ, ಕುಂಕುಮ, ಶ್ರೀಗಂಧ, ಸಿಹಿ, ಆರತಿ ಇರಬೇಕು. ಸಹೋದರನಿಗೆ ಆರತಿ ಮಾಡಿ, ತಲೆಗೆ ಅಕ್ಷತೆ ಹಾಕಿ, ಹಣೆಗೆ ಕುಂಕುಮ ಮತ್ತು ಗಂಧ ಇಟ್ಟು ಸಿಹಿ ತಿನ್ನಿಸಬೇಕು.


Leave a Reply

Your email address will not be published. Required fields are marked *